Friday, November 2, 2007

ಇದು ಕನ್ನಡಿಗರ ಹೆಮ್ಮೆಯೇ?

'ಜಗತ್ತು ಬದಲಾಗಿದೆ, ನಾವ್ಯಾಕೆ ಬದಲಾಗಬಾರದು?...'ಕರ್ನಾಟಕ ರಾಜ್ಯೋತ್ಸವ ದಿನ ಬೆಳಿಗ್ಗೆ ಏಳು ಗಂಟೆಗೆ 'ಸಮಸ್ತ ಕನ್ನಡಿಗರ ಹೆಮ್ಮೆ'ಯಾಗಿ ಏಳು ವರ್ಷಗಳ ಹಿಂದೆ ಜನ್ಮತಾಳಿದ 'ವಿಜಯ ಕರ್ನಾಟಕ' ಪತ್ರಿಕೆ ಓದಲು ಕೈಗೆತ್ತಿಕೊಂಡಾಗ ಕಂಡ ಬರಹವಿದು. ಪ್ರಜಾವಾಣಿ, ಕನ್ನಡಪ್ರಭ ಮೂರು ಪತ್ರಿಕೆಗಳನ್ನೂ ಅವತ್ತು ಮನೆಗೆ ತರಿಸಿದ್ದೆ. ಮೊದಲು ವಿಜಯಕರ್ನಾಟಕವನ್ನೇ ಕೈಗೆತ್ತಿಕೊಂಡೆ. ಅದಕ್ಕೆ ಕಾರಣವೂ ಇತ್ತು. ಒಂದು ತಿಂಗಳ ಹಿಂದೆಯೇ ನನ್ನೊಬ್ಬ ಸ್ನೇಹಿತ ವಿಜಯಕರ್ನಾಟಕ 'ಹೊಸತಾ'ಗುತ್ತಿದೆ ಎಂದಿದ್ದ. ಕೆಲದಿನಗಳಿಂದ ವಿ.ಕ.ದಲ್ಲಿಯೂ ನಿತ್ಯ ನಾವು ಹೊಸತಾಗುತ್ತಿದ್ದೇವೆ..ಬದಲಾಗಲಿದ್ದೇವೆ..ಎಂದು ಜಾಹೀರಾತು ಬೇರೆ. ಅಂದಿನಿಂದ ನವೆಂಬರ್ 1 ರವರೆಗೆ ಕಾಯುವುದೇ ಆಯಿತು.

ಕಾಯುತ್ತಿದ್ದ ದಿನ ಬಂದೇ ಬಿಟ್ಟಿತ್ತು. 'ಜಗತ್ತು ಬದಲಾಗಿದೆ. ನಾವೂ ಬದಲಾಗುತ್ತಿದ್ದೇವೆ'- ಒಂದು ಪುಟದಲ್ಲಿ ಈ ಎರಡು ವಾಕ್ಯಗಳನ್ನು ದೊಡ್ಡಕ್ಷರದಲ್ಲಿ ಬರೆಯಲಾಗಿತ್ತು. ವಿ.ಕ. ವೆಂದು ಕೈಗೆತ್ತಿಕೊಂಡ ನಾನು 'ಟೈಪ್ಸ್ ಆಫ್ ಇಂಡಿಯಾ' ವನ್ನು ಓದುತ್ತಿದ್ದೇನೇನೋ ಎಂದೆನಿಸಿ ನಾಲ್ಕೈದು ಬಾರಿ ತಿರುವಿ ನೋಡಿದ್ದೆ.

ಕಳೆದ ಏಳು ವರ್ಷಗಳ ಹಿಂದೆ ವಿಜಯಕರ್ನಾಟಕ ಎಂಬ ಹೆಸರಿನ ಅಚ್ಚಕನ್ನಡದ ಪತ್ರಿಕೆಯೊಂದು ನಮ್ಮ ಕೈಗೆ ಸಿಕ್ಕಾಗ ಕನ್ನಡಿಗ ಹೆಮ್ಮೆ ಪಟ್ಟಿದ್ದ. ವಿ.ಕ ಕನ್ನಡ ಪತ್ರಿಕೆಗಳ ನಡುವೆ ನಂ.1 ಸ್ಥಾನ ಗಿಟ್ಟಿಸಿಯೂ ಆಯ್ತು. ಅದಾಗಲೇ 'ಟೈಮ್ಸ್ ಗ್ರೂಪ್' ಗೆ 180 ಕೋಟಿ ರೂಪಾಯಿಗೆ ಮಾರಿಯೂ ಆಯ್ತು. ನಾವು ಟೈಮ್ಸ್ ಗ್ರೂಪ್ ಗೆ ಮಾರಿಕೊಂಡಿದ್ದೇವೆ ಅದೂ ನಮ್ಮ ಹೆಮ್ಮೆ ಎಂದುಕೊಂಡಿತ್ತು ವಿಜಯಕರ್ನಾಟಕ.ಇಂದು ತನ್ನತನವನ್ನೇ ಮಾರಿಕೊಂಡು ಇದು ನಮ್ಮ ಬದಲಾವಣೆ..ಇದೂ ನಮ್ಮ ಹೆಮ್ಮೆ ಎಂದು ಬೀಗುತ್ತಿದೆ. ಟೈಮ್ಸ್ ಆಫ್ ಇಂಡಿಯಾದ ಮುಖವಾಣಿಯಂತೆ ಬಂದಿರುವ ಈ ವಿಜಯ ಕರ್ನಾಟಕ ಕನ್ನಡಿಗರ ಹೆಮ್ಮೆಯೇ? ಬದಲಾವಣೆ ಯಾವ ತರದ್ದು? ಒಂದು ತಿಂಗಳಿಂದ ಹೊಸತಾಗುತ್ತಿದ್ದೇವೆ..ನಮ್ಮದೆಲ್ಲವೂ ಹೊಸತು ಎಂದು ಜಾಹೀರಾತು ನೀಡಿ ಜನತೆಯನ್ನು ಮೂರ್ಖರನ್ನಾಗಿ ಮಾಡಿ ಇದೀಗ ಪತ್ರಿಕೆ ನೋಡಿಯೂ ಓದುಗ ಕುರುಡನಾಗುತ್ತಾನೆ ಎಂದುಕೊಂಡಿದೆ. ಬದಲಾವಣೆ ಅಂದಾಗ ನಮ್ಮ ಕನ್ನಡಿಗರ ಬಗ್ಗೆ ಪುಟಗಟ್ಟಲೇ ಅಭಿಮಾನದ ಮಾತುಗಳಾಡುವ ವಿಶ್ವೇಶ್ವರ ಭಟ್ಟರು ಏನಾದರೂ ನೂತನ ಬದಲಾವಣೆ ತರುತ್ತಾರೆ ಎಂದೇ ಜನ ನಂಬಿದ್ದರು. ಆದರೆ ಕರ್ನಾಟಕ ರಾಜ್ಯೋತ್ಸವ ದಂದು ವಿ.ಕ ಕೊಟ್ಟ ಕೊಡುಗೆಯೇನು ಎಂಬುವುದನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ಹೇಳಿದರೂ ಕಡಿಮೆಯೇ.

ನಿನ್ನೆ ನಮ್ಮ ಪಕ್ಕದ್ಮನೆ ಅಂಕಲ್ ಓದಿ 'ಇದೇನಮ್ಮಾ,. ವಿ.ಕ. ಟೈಮ್ಸ್ ಆಫ್ ಇಂಡಿಯಾ ಆಗಿದೆ..ವಿ.ಕ.ಕ್ಕೆ ಒಂದು ಲುಕ್ ಇತ್ತು. ಇನ್ನು ಅದೂ ಇಲ್ಲ. ಎಲ್ಲಿ ಏನು ಓದಬೇಕೋ ಗೊತ್ತಾಗುತ್ತಿಲ್ಲ..." ಎಂದು ಬೇಸರ ವ್ಯಕ್ತಪಡಿದ್ದರು. ಒಂದು ವೇಳೆ ವಿ.ಕ. ತನ್ನಲ್ಲಿಯೇ ಒಂದು ಹೊಸ ಬದಲಾವಣೆ ತರುತ್ತಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ 'ಟೈಮ್ಸ್ ಆಫ್ ಇಂಡಿಯಾ'ದ ರೂಪ ನೀಡಿ. 'ಜಗತ್ತಿನ ಬದಲಾವಣೆಗಾಗಿ ನಮ್ಮದೊಂದು ಅದ್ಭುತ ಬದಲಾವಣೆ' ಎಂದು ಹೇಳಿ ಓದುಗರನ್ನು ಮೂರ್ಖರನ್ನಾಗಿಸಲು ಹೊರಟಿದೆ. ಖಂಡಿತವಾಗಿಯೂ ವಿ.ಕ.ಕ್ಕೆ ಕೋಕ್ ಬೀಳುವ ದಿನ ದೂರವಿಲ್ಲ. ಟೈಮ್ ಗ್ರೂಪ್ಗೆ ಬೇಕಾಗಿರೋದು ಕರ್ನಾಟಕವಲ್ಲ, ಕನ್ನಡಿಗರಲ್ಲ.. ಬದಲಾಗಿ ಅವರ ಬ್ರಾಂಡ್..ಅದಕ್ಕಾಗಿಯೇ ನೋಡಿ ವಿ.ಕ ದ 'ಲಾಂಛನ'ವೂ ಬದಲಾಗಿದೆ. ಒಂದೆಡೆ ನಾವು ಕನ್ನಡಿಗರಿಗಾಗಿ, ನಾವು ಕನ್ನಡಿಗರ ಹೆಮ್ಮೆ ಎಂದು ಬೀಗುವ ಈವರೆಗೆ ಕನ್ನಡಿಗರ ಮೆಚ್ಚಿನ ಪತ್ರಿಕೆಯಾಗಿದ್ದ ವಿ.ಕ. ಏನು ಮಾಡುತ್ತಿದೆ? ಇದು ಕನ್ನಡದ ಹೆಮ್ಮೆಯಲ್ಲ, ಅವಮಾನ. ಯಾವಾಗ ವಿ.ಕ. ಒಡೆತನ ಟೈಮ್ಸ್ ಗ್ರೂಪ್ ಪಾಲಾಯಿತೋ ಉಷಾಕಿರಣ, ವಿಜಯ ಟೈಮ್ಸ್ ನಿಂತುಹೋಯಿತು. ಇದೀಗ ವಿ.ಕ. ಟೈಮ್ಸ್ ರೂಪು ನೀಡಿ ಜನರಿಗೆ ಇನ್ನೊಂದು 'ಟೈಮ್ಸ್ ಆಫ್ ಇಂಡಿಯಾ' ನೀಡುವ ಕೆಲ್ಸ. ಇದು ಜಗತ್ತಿನ ಬದಲಾವಣೆಗೆ ಅಲ್ಲ, ಕ್ರಿಯಾಶೀಲತೆ ಅಲ್ಲ, ವಿಕಾಸವಲ್ಲ..ಇದು ವಿ.ಕದ ಅಳಿವು..ಉಳಿವಲ್ಲ..ನಿರೀಕ್ಷೆಯಲ್ಲಿರಿ..ಕನ್ನಡಿಗರ ಹೆಮ್ಮೆಯಿಂದೇ ಬೀಗುವ ವಿಜಯ ಕರ್ನಾಟಕ ನಮ್ಮಿಂದ ದೂರವಾಗುವ ದಿನ ದೂರವಿಲ್ಲ..

5 comments:

ಚಿತ್ರಾ ಸಂತೋಷ್ said...

ಹಲೋ ಅರ್ಚನಾ..ಬ್ಲಾಗ್ ಚೆನ್ನಾಗಿದೆ...ಒಳ್ಳೆ ವಿಷ್ಯದ ಬಗ್ಗೆ ಬರೀತಾ ಇದ್ದೀರಾ? ಶುಭವಾಗಲಿ. ವಿ.ಕ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ನನ್ನ ಸಹಮತನೂ ಇದೆ

B.Rajesh said...

Archana nimma blognalli heege charcheyannu munduvarisi. Nimage Danyavadagalu.
rajesh

Archana said...

ರಾಜೇಶ್,
ನಿಮ್ಮ ಸಲಹೆಗೆ ಕೃತಜ್ಞತೆಗಳು. ತಾವೂ ಈ ವೇದಿಕೆಯಲ್ಲಿ ಕೈಜೋಡಿಸಿದರೆ..

v.v. said...

Archana,

I have been reading V.K. regularly for the past year and a half. As an avid newspaper reader, I too was curious about the changes that were being advertised and eventually the changes happened I was completely underwhelmed.

The only good thing that has been introduced is the "Corrections" section. But, I feel even that's not enough.

If V.K. is really serious about correcting factual errors, they should publish corrections pro actively rather than making light of the mistakes brought to their attention by the readers. (You may like to take a look at my Noorentu Sullu blog for a bit more about factual errors in V.K. in particular and news media in general.)

I'm not as worried about V.K. becoming a clone of TOI though.

Archana said...

ಕೃತಜ್ಞತೆಗಳು ವಿವಿ ಅವರೇ, ನಿಮ್ಮ ಅಭಿಪ್ರಾಯಕ್ಕೆ ಸದಾ ಸ್ವಾಗತ